ಅಗುಳಿ ಕಿತ್ತಿಹ ಕದಕೆ
ರಕ್ಷೆ ನೀಡುವ ಧೈರ್ಯ
ಎಲ್ಲಿಂದ ಬರಬಹುದು
ಹೇಳು ಗೆಳೆಯ,
ಕಂಡ ಕಂಡಲ್ಲೆಲ್ಲಾ ಕೊರೆದ
ಕಾಂಡವ ಕಂಡೆ, ಮತ್ತೆ ಬುಡಮೇಲು
ಮರದ ಸಹಿತ.
ಮಾರುಮಾರಿಗೂ ಮಂದಿ
ಸೇರಿಹರು ಜೋಡಿಸಲು
ಮರಮುಟ್ಟು, ಒಣಸೀಳು
ಸಿಗಬಹುದೇ, ಎಂದು
ನೀರ ಕಾಯಿಸಿ ಬಿಸಿ ನೀರ
ಮೀಯಲು ಮೈನೋವು
ತಣಿಯುವುದು ಎಂದು ತಿಳಿದು
ಗೊತ್ತಿಲ್ಲ, ನಾಳೆ ಕುಡಿಯಲು
ನೀರಿಲ್ಲ, ಒಣಭೂಮಿ,
ಬರಡು ನೆಲ ಮತ್ತೆ ಜೊತೆಗಾರ
ಸೊಳ್ಳೆ, ತಿಗಣಿ
ತರುವಾಯ ತಡಿ ಮರುಳೇ,
ಅಷ್ಟಾಂಗವಕ್ರರು ತಾಯಗರ್ಭವ
ಸೀಳಿ ತಲೆಮಾರು ತಂತುಗಳು
ಬರಬಹುದು ನಾಳೆ
ಕಾಯುತಿದೆ ಕಾರ್ಕೋಟಕ
ಮೈಯೆಲ್ಲ ಉರಿನವೆಯ
ಬೆಂಕಿ ಎದ್ದು
ಮನುಜ ಮನುಜನ
ಮುಕ್ಕಿ ಹುರಿದು ತಿಂದು
ಹರವಾದ ದಾರಿಯಲಿ
ಹದವಾದ ಹುರುಪಿನಲಿ
ಅಭಿವೃದ್ಧಿ ಹೆಸರಿನಲಿ
ನಡೆಯುತಿದೆ ನಾಶ
ಗಿಡದ ಮರವೇರಿ
ಬುಡ ಕಡಿದ ಪೆದ್ದ
ಪಡದೇ ಇರನು ವಿಷಾದ
*****
Related Post
ಸಣ್ಣ ಕತೆ
-
ಸ್ವಯಂಪ್ರಕಾಶ
ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…
-
ಬಿರುಕು
ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್ತಿ ಬೆಚ್ಚಿ… Read more…
-
ಕೇರೀಜಂ…
ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…
-
ಹನುಮಂತನ ಕಥೆ
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…
-
ಅಮ್ಮ
‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…